ಗುರುವಾರ, ಜೂನ್ 9, 2016

ಸುಧಾ ಆಡುಕಳ - ಟಾಗೋರ್ ಅವರ - " ಚಿತ್ರಾ " { ನಿ- ಡಾ / ಶ್ರೀಪಾದ ಭಟ್ } ಅಬಿನಯ - ನೃತ್ಯ ನಿಕೇತನ ಕೊಡವೂರು { ರಿ }

ಹೀಗೆ.....
ಚಿತ್ರಾ ನಾಟಕ ನೋಡಿದೆ.
ಕಾವ್ಯದ ರಮ್ಯಲೋಕವನ್ನು ನಿರ್ದೇಶಕರು ರಂಗಕ್ಕಿಳಿಸಿದ್ದಾರೆ.
ಪಾತ್ರವನ್ನು ಎದೆಗಿಳಿಸಿಕೊಂಡು ತುಂಬು ಉತ್ಸಾಹದಿಂದ ನಟಿಸಿದ್ದಾರೆ ಸುಂದರ ತರಳೆಯರು.
ಅವರದು ಬರಿಯ ಅಭಿನಯವಲ್ಲ; ಚಿತ್ರಾಳ ಕಸುವನ್ನೇ ಮನದೊಳಗೆ ಇಳಿಸಿಕೊಂಡಿದ್ದಾರೆ ಎನಿಸಿತು.
ಎಲ್ಲರೂ ತುಂಬಾ ಸೂಕ್ಷ್ಮಗ್ರಾಹಿಗಳು.
ಒಂದು ಕ್ಷಣಕ್ಕೆ ಹೀಗನಿಸಿತು.
ಸಹಚರಿಯಾಗಿ ಜೊತೆಗಿರಬಲ್ಲ ಇಷ್ಟು ಅರ್ಜುನರು ಇಂದಿನ ಸಮಾಜದಲ್ಲಿರುವರೆ?
ಇಷ್ಟೂ ಚಿತ್ರೆಯರ. ನಿಜದ ಒಳಗು ಶಾಶ್ವತವೆ?
ಹಾಗಾದರೆ ಎಷ್ಟು ಸಂತೋಷ!
ಅಷ್ಟು ಘನತೆಯ ಸಂಬಂಧಗಳು ಸ್ೃಷ್ಟಿಯಾಗುತ್ತವೆ.
ಹಾಗಾಗಿ ನಿಜದ ಅರಿವಿನ ಅರಿವಿರುವ ಅರ್ಜುನರ ಸ್ೃಷ್ಟಿ ಇಂದಿನ ತುರ್ತು ಅನಿಸಿತು.
ಚಿತ್ರೆಯರನ್ನ. , ಅಂಥ ಮನಸಿನವರನ್ನ ಉಳಿಸಿಕೊಳ್ಳೋಣ.

ಭಾನುವಾರ, ಜೂನ್ 5, 2016

ನೃತ್ಯ ನಿಕೇತನ ಕೊಡವೂರು { ರಿ } - ಟಾಗೋರ್ ಅವರ ನೃತ್ಯ ನಾಟಕ -’ಚಿತ್ರಾ " { ನಿ- ಡಾ / ಶ್ರೀಪಾದ ಭಟ್ }

Photo
Tagore's Chitra -Nritya niketana Kodavoor { r } Udupi , Directed by Dr. Sripada Bhat
ಉತ್ತಮವಾದ ಒಂದು ನೃತ್ಯ ನಾಟಕ ವನ್ನು ನಮ್ಮ ತಂಡಕ್ಕೆ ಕಟ್ಟಿ ಕೊಟ್ಟ ನಿರ್ದೇಶಕರಾದ ಡಾ|| ಶ್ರೀಪಾದ ಭಟ್ ರವರಿಗೆ,ನಿರ್ದೇಶಕ ರೊಂದಿಗೆ ಸಂಗೀತದಲ್ಲಿ ಸಹಕರಿಸಿದ ಬಾಲಚಂದ್ರ ಭಾಗವತರಿಗೂ,ಉಷಾ,ಪೂಜಾ,ಹಿರೇಮಠ ರವರಿಗೂ,ಮಾಧವಾಚಾರ್,ಲಕ್ಷ್ಮೀನಾರಾಯಣ ಉಪಾಧ್ಯ,ಭಕ್ತ,ಸುಧೀಂದ್ರ,ದೀಪಕ್,ಜಯಂತ್,ವಿನಾಯಕ್,ನೃತ್ಯ ಸಂಯೋಜನೆ ಮಾಡಿದ, ಮಾನಸಿ,ಸಹಕರಿಸಿದ ದೀಮಹಿ,ಅನಘ,ಬೆಳಕುಸಂಯೋಜಿಸಿದ ರಾಜುಮಣಿಪಾಲ್,ಭುವನ್,ಕೌಶಿಕ್ ರಾಘು,ಸುಧಾ ಮೇಡಂ,ಪ್ರಸಾದ್ ಮಟ್ಟು,ಪ್ರಕಾಶ್ ಕುಂಜಿಬೆಟ್ಟು ಪ್ರೊ|| ಮುರಳೀಧರ ಉಪಾಧ್ಯ,ಶಾರದ ಉಪಾಧ್ಯ,ದಾಮೋದರ ನಾಯಕ್ ವಸ್ತ್ರ ವಿನ್ಯಾಸ ಮಾಡಿದ ಸುದರ್ಶನ, ಹಾಗೂ ಶಾಂಭವಿಗೂ ಕಲಾವಿದೆಯರಾಗಿ ಸಹಕರಿಸಿದ ಮಾನಸಿ, ಅನಘ,ಧೀಮಹಿ,ವಿಂದ್ಯ,ಸುರಭಿ,ಶಾಂಭವಿ,ಸಿಂಚನ,ಶ್ರೇಯ ಆಚಾರ್ಯ,ಶ್ರೇಯಾ ಪೈ,ನಿಖಿತ,ಅಶ್ವಿನಿ,ಸಾಧನ,ಪೂರ್ವಿ,ಸಂಜನ,ಶ್ರೇಯಾ ಭಟ್,ಭಾವನ,ವಿದ್ಮಹಿ,ಪ್ರಿಯಂವದ  ಹಾಗೂ ಚಿನ್ನಾರಿ ತಂಡಕ್ಕೂ,ಮತ್ತು ನಾಗೇಂದ್ರ ಪೈ ಯವರಿಗೂ,ನಮ್ಮವಿದ್ಯಾರ್ಥಿಗಳ ಹೆತ್ತವರಿಗೂ ಹಾಗೂ ಪ್ರತ್ಯಕ್ಷವಾಗಿ ,ಪರೋಕ್ಷವಾಗಿ ಸಹಕರಿಸಿದ,ಈ ನೃತ್ಯ ನಾಟಕದ ಯಶಸ್ಸಿನಲ್ಲಿ,ಕೈಜೋಡಿಸಿದ ಎಲ್ಲರಿಗೂ ನ್ರತ್ಯನಿಕೇತನ ಕೊಡವೂರು ಪರವಾಗಿ ಹ್ರತ್ಪೂರ್ವಕ ವಂದನೆ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ -ಸುಧೀರ್ ಕೊಡವೂರು