ಗುರುವಾರ, ಜೂನ್ 9, 2016

ಸುಧಾ ಆಡುಕಳ - ಟಾಗೋರ್ ಅವರ - " ಚಿತ್ರಾ " { ನಿ- ಡಾ / ಶ್ರೀಪಾದ ಭಟ್ } ಅಬಿನಯ - ನೃತ್ಯ ನಿಕೇತನ ಕೊಡವೂರು { ರಿ }

ಹೀಗೆ.....
ಚಿತ್ರಾ ನಾಟಕ ನೋಡಿದೆ.
ಕಾವ್ಯದ ರಮ್ಯಲೋಕವನ್ನು ನಿರ್ದೇಶಕರು ರಂಗಕ್ಕಿಳಿಸಿದ್ದಾರೆ.
ಪಾತ್ರವನ್ನು ಎದೆಗಿಳಿಸಿಕೊಂಡು ತುಂಬು ಉತ್ಸಾಹದಿಂದ ನಟಿಸಿದ್ದಾರೆ ಸುಂದರ ತರಳೆಯರು.
ಅವರದು ಬರಿಯ ಅಭಿನಯವಲ್ಲ; ಚಿತ್ರಾಳ ಕಸುವನ್ನೇ ಮನದೊಳಗೆ ಇಳಿಸಿಕೊಂಡಿದ್ದಾರೆ ಎನಿಸಿತು.
ಎಲ್ಲರೂ ತುಂಬಾ ಸೂಕ್ಷ್ಮಗ್ರಾಹಿಗಳು.
ಒಂದು ಕ್ಷಣಕ್ಕೆ ಹೀಗನಿಸಿತು.
ಸಹಚರಿಯಾಗಿ ಜೊತೆಗಿರಬಲ್ಲ ಇಷ್ಟು ಅರ್ಜುನರು ಇಂದಿನ ಸಮಾಜದಲ್ಲಿರುವರೆ?
ಇಷ್ಟೂ ಚಿತ್ರೆಯರ. ನಿಜದ ಒಳಗು ಶಾಶ್ವತವೆ?
ಹಾಗಾದರೆ ಎಷ್ಟು ಸಂತೋಷ!
ಅಷ್ಟು ಘನತೆಯ ಸಂಬಂಧಗಳು ಸ್ೃಷ್ಟಿಯಾಗುತ್ತವೆ.
ಹಾಗಾಗಿ ನಿಜದ ಅರಿವಿನ ಅರಿವಿರುವ ಅರ್ಜುನರ ಸ್ೃಷ್ಟಿ ಇಂದಿನ ತುರ್ತು ಅನಿಸಿತು.
ಚಿತ್ರೆಯರನ್ನ. , ಅಂಥ ಮನಸಿನವರನ್ನ ಉಳಿಸಿಕೊಳ್ಳೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ